ವೈವಿಧ್ಯಮಯ ಬಣ್ಣದ ಭಾವಗಳನ್ನು ತಮ್ಮ ಕ್ರಿಯಾಶೀಲತೆಯ ಕಂಗಳಲ್ಲಿ ಸೆರೆಹಿಡಿಯುವವರು ಛಾಯಾಗ್ರಾಹಕರು~ ಜನಾರ್ದನ್ ಕೊಡವೂರು.

ವೈವಿಧ್ಯಮಯ ಬಣ್ಣದ ಭಾವಗಳನ್ನು ತಮ್ಮ ಕ್ರಿಯಾಶೀಲತೆಯ ಕಂಗಳಲ್ಲಿ ಸೆರೆ ಹಿಡಿಯುವ ವರು ಛಾಯಾಗ್ರಾಹಕರು. ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಬಂದಂತೆ ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಛಾಯಾಗ್ರಾಹಕನ ಕರ್ತವ್ಯ ಎಂದು ಪತ್ರಕರ್ತ ಜನಾರ್ದನ್ ಕೊಡವೂರು ಅಭಿಪ್ರಾಯ ಪಟ್ಟರು.

ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಹಾಗು ನಿಕಾನ್ ಕ್ಯಾಮೆರಾ ಸಂಸ್ಥೆ ಜಂಟಿ ಯಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

  • ಅದೃಷ್ಟಶಾಲಿ ಛಾಯಾಗ್ರಾಹನಾಗಿ ಶಿವಾ ನಂದ ನಾಯಕ್ ಆಯ್ಕೆಯಾದರು. ಈ ಕಾರ್ಯಾಗಾರದಲ್ಲಿ 75ಕ್ಕೂ ಮಿಕ್ಕಿ ಛಾಯಾ ಗ್ರಾಹಕರು ಭಾಗವಹಿಸಿದ್ದರು.
  • ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ನೀತಾ ಶಂಕರ್, ನಿಕಾನ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಸೂರಜ್ ಪ್ರಭು, ಮಹೇಶ್ ಟೆಕ್ನಿಕಲ್ ವಿಭಾಗದ ಸ್ಟೇರಿನ್, ಶ್ರೀನಿವಾಸ್ ನಂದು ಕಾಮತ್, ರಮೇಶ್ ಭಟ್ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು.
  • ಪ್ರಧಾನ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ ವಂದಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply