ಸಗ್ರಿ ಬ್ರಹ್ಮಕಲಶೋತ್ಸವ – ನಾಗಮಂಡಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿಯ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8 ರಿಂದ 11 ನೇ ತಾರೀಖಿನ ವರೆಗೆ ನಡೆಯಲಿರುವ ನವೀಕೃತ ನಾಗದೇವರ ಗುಡಿ ಸಮರ್ಪಣೆ , ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿ ಗೌರವಾಧ್ಯಕ್ಷರೂ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು. ಭಗವಂತನ ದಯೆಯಿಂದ ಈ ಸತ್ಕರ್ಮ ಯಶಸ್ವಿಯಾಗಲೆಂದು ಶುಭಕೋರಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಪಾತ್ರಿಗಳಾದ ಶ್ರೀ ಗೋಪಾಲಕೃಷ್ಣ ಸಾಮಗ, ಅನಂತ ಸಾಮಗ, ಪಾಡಿಗಾರು ಶ್ರೀನಿವಾಸ ತಂತ್ರಿ‌, ಕಲ್ಲಂಜೆ ವಿಠಲ ಭಟ್, ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಮಧುಸೂದನ ತಂತ್ರಿ, ಮಧ್ವೇಶ ತಂತ್ರಿ ಮೊದಲಾದವರಿದ್ದರು .

 
 
 
 
 
 
 
 
 
 
 

Leave a Reply