ರಂಗಾಯಣ ಶಿವಮೊಗ್ಗ ಅಭಿನಯನದ – ವಿ ದ ಪೀಪಲ್ ಆಫ್ ಇಂಡಿಯಾ

ಡಾ.ಜಿ.ಶ೦ಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಸಂಘ, ಸಾಹತ್ಯ ಸಂಘ, ರಾಜ್ಯಶಾಸ್ತ್ರ ಸಂಘ
ಇವರ ಸಹಯೋಗದಲ್ಲಿ ದಿನಾಂಕ 10-03-2022 ರಂಗಾಯಣ ಶಿವಮೊಗ್ಗ ಇವರು ಅಭಿನಯಿಸಿರುವ ರಾಜಪ್ಪ ದಳವಾಯಿ ನಿರ್ದೇಶನದ ನಾಟಕ – ವಿ ದ ಪೀಪಲ್ ಆಫ್ ಇಂಡಿಯಾ ಉಡುಪಿಯ ಪುರಭವನದಲ್ಲಿ ಪ್ರದರ್ಶಿಸಲ್ಪಟ್ಟಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ ಶೆಟ್ಟಿ ಎಸ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ. ಭಾರತದ ಸಂವಿಧಾನ, ಡಾ.ಬಿ ಆರ್ ಅಂಭೇಡ್ಕರ್ ಹಾಗೂ ಭಾರತದ ಜನಮಾನಸದ ದೃಶ್ಯಕಾವ್ಯವಾದ ಈ ಶೈಕ್ಷಣಿಕ ನಾಟಕವನ್ನು ವಿದ್ಯಾರ್ಥಿಗಳು ನೋಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಂಗಾಯಣ ಶಿವಮೊಗ್ಗದ ಮ್ಯಾನೇಜರ್ ಆದ ಶ್ರೀ. ಶೈಲೇಶ್, ವಿಜ್ಞಾನ ವಿಭಾಗ ಡೀನ್ ಶ್ರೀ ರಾಮಚಂದ್ರ ಅಡಿಗ ಜಿ, ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಶ್ರೀಮತಿ ಗೌರಿ ಎಸ್ ಭಟ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ. ಅಶೋಕ ಭಂಡಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ.ವಾಣಿ ಆರ್ ಬಲ್ಲಾಳ್, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಶ್ರೀಮತಿ ಆಶಾ, ಸಾಹಿತ್ಯ ಸಂಘದ ಸಂಚಾಲಕರಾದ ಕು, ರಮ್ಯ ಕೆ. ಐತಾಳ್, ಶ್ರೀಮತಿ ಸುಚಿತ್ರಾ ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply