ಲಕ್ಷ ತುಳಸಿ ಅರ್ಚನೆ

ಸ್ವಾತಂತ್ರ್ಯ ಉತ್ಸವದ ಶುಭ ಸಂದರ್ಭದಲ್ಲಿಂದು  ಜೆ.ಎಸ್ .ಬಿ .ಸಮಾಜ ಬಾಂಧವರು ಪೂಜ್ಯ ಗೋಕರ್ಣ ಮಠಾಧೀಶರ ಶುಭಾಶೀರ್ವಾದದೊಂದಿಗೆ  ತಮ್ಮ ದ್ವಾರಕಾ ನಾಥ ಭವನದಲ್ಲಿ ಆಯೋಜಿಸಿದ್ದ ಲಕ್ಷ ತುಳಸೀ ಅರ್ಚನೆ ಕಾರ್ಯಕ್ರಮದಲ್ಲಿ ಭಕ್ತ ಜನರ ಅಪೇಕ್ಷೆ ಮೇರೆಗೆ ಪೂಜ್ಯ ಪುತ್ತಿಗೆ ಶ್ರೀಪಾದರು ಭಾಗವಹಸಿ ಶುಭಾಶೀರ್ವಚನ ನೀಡಿದರು.
ಪೂಜ್ಯ ಶ್ರೀಪಾದರನ್ನು ಭಕ್ತಿ ಗೌರವಾದರಗಳೊಂದಿಗೆ ಸ್ವಾಗತಿಸಿ ಪಾದಪೂಜೆಯನ್ನು ನೆರವೇರಿಸಿದರು.
ಪೂಜ್ಯ ಶ್ರೀಪಾದರು ಉಪಸ್ಥಿತರಿರುವ ಎಲ್ಲ ಸಮಾಜ ಬಾಂಧವರಿಗೆ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ನೀಡಿ  ಮುಂಬರುವ ತಮ್ಮ ಪರ್ಯಾಯಕ್ಕೆ ನೆರೆದ ಎಲ್ಲರನ್ನು ಪ್ರೀತಿಯಂದ ಆಮಂತ್ರಿಸಿದರು.
ಈ ಎಲ್ಲ ಕಾರ್ಯಕ್ರಮವುಅತ್ಯಂತಶಿಸ್ತುಬದ್ಧವಾಗಿ ವೈಭವಯುತವಾಗಿ ನಡೆಯಿತು .
 
 
 
 
 
 
 
 
 
 
 

Leave a Reply