ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ರವರು ನಡೆಸುತ್ತಿರುವ ಬೃಹತ್ ಸಮಾಜ ಸೇವಾ ಸಂಸ್ಥೆ ಯಾದ ಆದಮ್ಯ ಚೇತನ ಕಾರ್ಯಾಲಯಕ್ಕೆ ಭೇಟಿ ನೀಡಿದ ಪೂಜ್ಯ ಪುತ್ತಿಗೆ ಶ್ರೀಪಾದರು ಸಂಸ್ಥೆ ನಡೆಸುತ್ತಿರುವ ಬೃಹತ್ ಅನ್ನದಾನ ,ದಾಸೋಹ ಕಾರ್ಯವೈಖರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು .
ಅದಮ್ಯ ಚೇತನದ ಮುಖ್ಯಸ್ಥೆ ಶ್ರೀಮತಿ ತೇಜಸ್ವಿನಿಯವರು ತಮ್ಮ ಸಿಬ್ಬಂದಿಯವರ ಜೊತೆಗೆ ಪೂಜ್ಯ ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು .
ಪೂಜ್ಯ ಶ್ರೀಪಾದರು ಭಗವದ್ಗೀತೆಯ ಸಂದೇಶವನ್ನು ನೀಡಿ,ಜನಸೇವೆಯೇ ಗೀತೆಯ ಪ್ರಮುಖ ಸಂದೇಶ ಎಂಬುದನ್ನು ಅದಮ್ಯ ಚೇತನ ತೋರಿಸಿ ಕೊಟ್ಟು ಒಂದು ಅಪೂರ್ವ
ಆದರ್ಶ ಸಂಸ್ಥೆ ಯಾಗಿದೆ ಎಂದು ಮನಃಪೂರ್ವಕ ಶ್ಲಾಘಿಸಿ ಹರಸಿದರು .
ಶ್ರೀ ಪೂರ್ಣಚಂದ್ರ ರವರು ಸ್ವಾಗತಿಸಿ ,ನಾಗೇಂದ್ರರವರು ವಂದಿಸಿದರು .