ಉಡುಪಿ: ಆಟೋ ಏರಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು.

ಉಡುಪಿ: ಮಠಾಧೀಶರು, ಧರ್ಮಗುರುಗಳು ಕಾರುಗಳಲ್ಲಿ ಓಡಾಡುವುದು ಸಾಮಾನ್ಯ. ಕೆಲವರಿಗೆ ಪೊಲೀಸ್ ಬೆಂಗಾವಲೂ ಇರುತ್ತದೆ. ಆದ್ರೆ , ಉಡುಪಿ ಪೇಜಾವರ ಶ್ರೀಗಳು ಆಟೋದಲ್ಲಿ ಪ್ರಯಾಣಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಉಡುಪಿಯ ಕಡಿಯಾಳಿ ದೇವಳಕ್ಕೆ ನೂತನ ಧ್ವಜಮರವನ್ನು ಹೊತ್ತು ತಂದ ಮೆರವಣಿಗೆಯಲ್ಲಿ ಭಾಗವಹಿಸಿದ ಶ್ರೀಗಳಿಗೆ ಮುಂದಿನ ಕಾರ್ಯಕ್ರಮಕ್ಕೆ ಹೋಗುವ ಅವಸರವಿತ್ತು. ಆದ್ರೆ, ಮೆರವಣಿಗೆ ಕಾರಣಕ್ಕೆ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲಾಗಿ ಬರುತ್ತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.

ಶ್ರೀಗಳಿಗೆ ತಮ್ಮ ವಾಹನದಲ್ಲಿ ತೆರಳಿದರೆ ವಿಳಂಬ ಆಗುವ ಸಾಧ್ಯತೆ ಇತ್ತು. ಹೀಗಾಗಿ ಥಟ್ಟನೆ ಅದೇ ದಾರಿಯಲ್ಲಿ ಬಂದ ರಿಕ್ಷಾವನ್ನು ಏರಿ, ಕುಳಿತು ಒಳಮಾರ್ಗವಾಗಿ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ತೆರಳಿದರು.‌

 
 
 
 
 
 
 
 
 
 
 

Leave a Reply