ಓಂತಿಬೆಟ್ಟುವಿನಲ್ಲಿ “ಗ್ರಾಮ ಒನ್ ” ಉದ್ಘಾಟನೆ

ರಾಜ್ಯ ಸರ್ಕಾರದ ಪ್ರಮುಖ ಮಹಾತ್ವಕಾಂಕ್ಷಿ ಯೋಜನೆಯಾದ “ಗ್ರಾಮ ಒನ್ “ಅನ್ನು ದಿನಾಂಕ 25/06/22 ರ ಶನಿವಾರದಂದು ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ 39ನೇ ಕೊಡಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಓಂತಿಬೆಟ್ಟುವಿನ ಹೃದಯ ಭಾಗ ದಲ್ಲಿರುವ ಶ್ರೀ ಹರಿಕೃಪಾ ಕಾಂಪ್ಲೆಕ್ಸ್ ನ ಶ್ರೀ ಸಾಯಿ ಡಿಜಿಟಲ್ ನಲ್ಲಿ ಜನಪ್ರಿಯ, ಸರಳ ಸಜ್ಜನಿಕೆಯ ಶಾಸಕರಾದ ಗೌರವಾನ್ವಿತ ಶ್ರೀಯುತ ಲಾಲಾಜಿ.ಆರ್. ಮೆಂಡನ್ ಅವರು ಉದ್ಘಾಟನೆಯನ್ನು ಮಾಡಿ ಶ್ರೀ ಸಾಯಿ ಡಿಜಿಟಲ್ ನ ಮಾಲಕರದ ಶ್ರೀಯುತ ರಾಜೇಶ್ ಕುಂದರ್ ಮತ್ತು ಶ್ರೀಮತಿ ಉಷಾ ಎಸ್ ಇವರಿಗೆ ಶುಭ ಹಾರೈಸಿದರು.

ಈ ಸಂಧರ್ಭ ದಲ್ಲಿ ಅಪರಾ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ಇವರು ಶುಭ ಹಾರೈಸಿದರು ಹಾಗೂ ಅತಿಥಿ ಗಳಾದ ಕೊಡಿಬೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾದ ಆಶಾ ಡಿ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಸದಾನಂದ ಪ್ರಭು, ಹಾಗು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಕಾಮತ್,ವಿ ಎ ಶ್ರೀ ಗಜೇಂದ್ರ, ಪಿ. ಡಿ. ಓ ಉಮೇಶ್ ನಾಯಕ್ ,ಸ್ಥಳೀಯರಾದ ಶ್ರೀ ಉಪೇಂದ್ರ ನಾಯಕ್,ಸುಂದರ್ ಕಾಂಚನ್, ಅನಿಲ್ ಶೆಟ್ಟಿ ಮಾಂಬೆಟ್ಟು, ಮೂರ್ತಿ ರಾವ್, ಗಣೇಶ್ ಸಾಲ್ಯಾನ್, ಶ್ರೀಮತಿ ಭಾರತಿ ಶೆಟ್ಟಿ ಅಂಜಾರು, ಶ್ರೀ ಶ್ರೀಶ ನಾಯಕ್ ಪೆರ್ನಾಕಿಲ, ಶ್ರೀಕಾಂತ್ ನಾಯಕ್, ದಿನೇಶ್ ಮೆಂಡನ್,ವಿಘ್ನಶ್ ನಾಯಕ್, ಗೋಪಾಲ್ ಕೃಷ್ಣ ಪ್ರಭು,ನಾಗೇಶ್ ಆಚಾರ್ಯ, ಸಂದೀಪ್ ಪೂಜಾರಿ,ಹಾಗೂ ವಾರ್ಡ್ ಸದಸ್ಯರಾದ ಸಂದೀಪ ಕುಮಾರ್, ಸಂದೀಪ್, ವಿನಯ್, ಅರುಣ್ ಶೆಟ್ಟಿ, ಶ್ರೀಮತಿ ಯಶೋಧ, ಶ್ರೀಮತಿ ವಸಂತಿ, ಶ್ರೀಮತಿ ವಿಜಯಲಕ್ಷ್ಮಿ ಶುಭ ಹಾರೈಸಿದರು.

 
 
 
 
 
 
 
 
 
 
 

Leave a Reply