ಆಗಸ್ಟ್ 20 2022ರಂದು ಕೊಂಕಣಿ ಮನ್ಯತಾ ದಿವಸದ ಮಾಣಿಕ್ಯೋತ್ಸವವನ್ನು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಡಗರದಿಂದ ಆಚರಿಸಲಾಯಿತು.ಪ್ರೌಢಶಾಲೆಯ ಮುಖ್ಯಸ್ಥೆ ಶ್ರೀಮತಿ ಸುನೀತಾ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀ ಮುಕುಂದ ಕಾಮತ್, ಕೊಂಕಣಿ ಭಾಷಾ ಸಂಪನ್ಮೂಲ ವ್ಯಕ್ತಿ ಶ್ರೀ ಅಲ್ಫೋನ್ಸ್ ಡಿ’ಕೋಸ್ಟಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಶ್ರೀ ರೋಬರ್ಟ್ ಮಿನೇಜಸ್ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಜಸಿಂತಾ ಲೋಬೊರವರು ದನ್ಯವಾದವಿತ್ತರು. ಕಾರ್ಯಕ್ರಮವನ್ನು ಕೊಂಕಣಿ ವಿಧ್ಯಾರ್ಥಿನಿ ಕುಮಾರಿ ಪವಿತ್ರಾ ಆಚಾರ್ಯರವರು ಕೊಂಕಣಿಯಲ್ಲಿಯೇ ನಿರೂಪಿಸಿದರು.