ಸಾಮಾಜಿಕ ಜಾಲತಾಣಗಳಲ್ಲಿ ವಿದ್ವಾನ್ ಮಟ್ಟು ಕೆ, ಪ್ರವೀಣ್ ತಂತ್ರಿ ಇವರ ಬಗ್ಗೆ ಅಪಪ್ರಚಾರ – ಅಭಿಮಾನಿಗಳಿಂದ ಖಂಡನೆ,

ದಿನಾಂಕ 11.10,2023 ರ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರವೀಣ್ ತಂತ್ರಿ ಎಂಬಾತ “ಕಷ್ಟ ಪರಿಹರಿ ಸುವುದಾಗಿ ವಂಚನೆ” ಎಂದು ಸುದ್ದಿ ಪ್ರಕಟವಾದ ಕಾರಣ ವಿಘ್ನ ಸಂತೋಷಿ ಸಮಾಜಘಾತುಕರು ಸಾಮಾಜಿಕ ಜಾಲತಾಣಗಳಲ್ಲಿ ವಿದ್ವಾನ್ ಜ್ಯೋತಿಷಿ ಮಟ್ಟು ಕೆ. ಪ್ರವೀಣ್ ತಂತ್ರಿಯವರೇ ಈ ವ್ಯಕ್ತಿ ಎಂಬಂತೆ ಬಿಂಬಿಸಿ ಅವರ ತೇಜೋವಧೆಯನ್ನು ಮಾಡುತ್ತಿರುವುದು ಅವರ ಅಭಿಮಾನಿ ಬಳಗದ ಗಮನಕ್ಕೆ ಬಂದಿರುತ್ತದೆ. 
ಸದ್ರಿ ವಿಷಯದ ಕುರಿತು ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ವಿಚಾರಿಸಿದಾಗ, ಬೆಂಗಳೂರಿನ ನಿವಾಸಿಯಾದ ಪ್ರತಿಭಾ ಎಂಬವರು ನೀಡಿರುವ ದೂರಿನ ಅನ್ವಯ ಅಲೆವೂರು ನಿವಾಸಿಯಾದ ಪ್ರವೀಣ್ ತಂತ್ರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ ಎಂದು ಮಾಹಿತಿಯನ್ನು ನೀಡಿರುತ್ತಾರೆ. 
ಈಗಾಗಲೇ ಕೆ. ವಾಸುದೇವ ತಂತ್ರಿಯವರ ಮಗನಾದ ವಿದ್ವಾನ್‌ ಜ್ಯೋತಿಷಿ ಮಟ್ಟು ಕೆ. ಪ್ರವೀಣ್ ತಂತ್ರಿಯವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸ್ಪಷ್ಟಿಕರಣವನ್ನು ಕೂಡ ನೀಡಿರುತ್ತಾರೆ.

ಗೌರವಾನ್ವಿತ ಮಟ್ಟು ಕೆ. ಪ್ರವೀಣ್ ತಂತ್ರಿಯವರಿಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ಇಂತಹ ಅಪಪ್ರಚಾರವನ್ನು ಅವರ ಅಭಿಮಾನಿಗಳಾದ ನಾವು ಖಂಡಿಸುವುದರ ಜೊತೆಗೆ ಸಾರ್ವಜನಿಕರು ಈ ವಿಷಯದಲ್ಲಿ ಯಾವುದೇ ಅನಗತ್ಯ ಗೊಂದಲ ಕ್ಕೊಳಗಾಗಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

ಈ ಸಂದರ್ಭದಲ್ಲಿ ಮಟ್ಟು ಲಕ್ಷ್ಮೀ ನಾರಾಯಣ ರಾವ್, ಗೋವಿಂದರಾಜ್, ಸುಧಾಕರ ಅಮೀನ್ ಪಾಂಗಾಳ, ನಾಗ ಭೂಷಣ ಶೇಟ್, ಹರೀಶ್ ಶೇರಿಗಾರ್ ಬೈಲಕೆರೆ ಹಾಗು ಮಟ್ಟು ಪ್ರವೀಣ್ ತಂತ್ರಿ ಉಪಸ್ಥಿತರಿದ್ದರು.      
 
 
 
 
 
 
 
 
 
 
 

Leave a Reply