ಕೋಟ: ಅಭಿಮಾನ್ ಫ್ರೆಂಡ್ಸ್ ನಾಗಬನ ಹಂದಟ್ಟು ಕೋಟ ಇವರ ೧೦ನೇ ವರ್ಷದ ಸಾರ್ವಜನಿಕ ಶಿವರಾತ್ರಿಜಾಗರಣೆ ಪ್ರಯುಕ್ತ ೨೦೨೦ನೇ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಟ ಸುದರ್ಶನ ಉರಾಳರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಇತ್ತಿಚಿಗೆ ಹಂದಟ್ಟು ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.ಇದರ ಜೊತೆಗೆ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಎಂ.ಫಿಲ್ನ್ನು ಪಡೆದು ಸಂಸ್ಕೃತದಲ್ಲಿ ಪಿ.ಎಚ್.ಡಿ ಯನ್ನು ಪಡೆದ ಡಾ|. ಪಿ. ಬಾಲಕೃಷ್ಣ ನಕ್ಷತ್ರಿ ಇವರನ್ನು ಸನ್ಮಾನಿಸಿ,ಗೌರವಿಸಲಾಯಿತು. ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ಪೂಜಾ, ಆನೆಗುಡ್ಡೆ ವಿನಾಯಕ ದೇವಸ್ಥಾನದ ಮಾಜಿ ಮನೇಜರ್ ಆನಂದರಾಮ್ ಉರಾಳ, ಸ್ಥಳೀಯರಾದ ಸೂರ್ಯನಾರಾಯಣ ಉರಾಳ, ಮಂಜುನಾಥ ಉರಾಳ, ನಾಗರಾಜ್, ಗೋಪಾಲ ಪೂಜಾರಿ, ಅಭಿಮಾನ್ ಫ್ರೆಂಡ್ಸ್ನ ಅಧ್ಯಕ್ಷ ರಾಮ ಪೂಜಾರಿ, ಹಾಗೂ ಅಭಿಮಾನ್ ಫ್ರೆಂಡ್ಸ್ನ ಸರ್ವ ಸದಸ್ಯರು ಉಪಸ್ಥಿತರಿದ್ದರು.