ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ – ಕೊಡವೂರಿನಲ್ಲಿ ಭೂಮಿ ಪೂಜೆ

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಜಗತ್ತೇ ಸಂತೋಷ ಪಡುವ ಸಂದರ್ಭದಲ್ಲಿ ಮತ್ತಷ್ಟು ಸೇವಾ ಕಾರ್ಯ ಮಾಡಿ ದೀನ ದುರ್ಬಲ ಬಡವರಿಗೆ ಬೆಳಕು ತರಬೇಕೆಂದು ಯೋಚಿಸಿ ರಾಮೋತ್ಸವ ಎಂಬ 30 ದಿನಗಳ ಕಾರ್ಯಕ್ರಮಗಳನ್ನು ಮಾಡಲಾಯಿತು.

ಕೊಡವೂರು ವಾರ್ಡಿನ ಜನರೇ ಯೋಚನೆ ಮಾಡಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದರ ಅಂಗವಾಗಿ ಮನೆ ಇಲ್ಲದವರಿಗೆ ಮತ್ತು ತುಂಬಾ ಹಳೆಯದಾದ ಮನೆಯನ್ನು ಗುರುತಿಸಿ ಮೋದಿ ಸರಕಾರ ಮತ್ತು ರಾಜ್ಯ ಸರ್ಕಾರದ ಅನುದಾನ ಜೊತೆಯಲ್ಲಿ ಕಾರ್ಯಕರ್ತರ ಶ್ರಮದಾನದಿಂದ ಮನೆ ನಿರ್ಮಾಣ ಮಾಡುವ ಮೂಲಕ ಬಾಚನಬೈಲು ಪರಿಸರದ ಅಪ್ಪಿಯವರ ಮನೆಯ ಗುದ್ದಲಿ ಪೂಜೆ ನಡೆಯಿತು.

 
 
 
 
 
 
 
 
 
 
 

Leave a Reply