ಜಮ್ಮು ಕಾಶ್ಮೀರ: ಜಮ್ಮು ಪ್ರದೇಶದಲ್ಲಿನ ರಾಜೌರಿ ಜಿಲ್ಲೆಯಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ)ಯ ಮೂವರು ಭಯೋತ್ಪಾದ ಕರನ್ನು ಬಂಧಿಸುವಲ್ಲಿ ಭಾರತೀಯ ಭದ್ರತಾ ಪಡೆ ಯಶಸ್ವಿಯಾಗಿದೆ.
ಜಂಟಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು. ಶನಿವಾರ ಮೂವರು ಲಷ್ಕರ್-ಎ- ತೈಬಾ (ಎಲ್ಇಟಿ) ಭಯೋತ್ಪಾದಕರನ್ನು ವಶಕ್ಕೆ ಪಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಇನ್ಸ್ಪೆಕ್ಟರ್ ಜನರಲ್ ಮಾಹಿತಿ ನೀಡಿದ್ದಾರೆ.
ಬಂಧನಕ್ಕೊಳಗಾದ ಮೂವರು ಭಯೋತ್ಪಾದಕರ ಬಳಿ ಇದ್ದ ಎರಡು ಎಕೆ -56 ರೈಫಲ್ಗಳು, ಎರಡು ಪಿಸ್ತೂಲ್ಗಳು, ನಾಲ್ಕು ಗ್ರೆನೇಡ್ಗಳು ಮತ್ತು ಒಂದು ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.