ಕೊಡವೂರು ಬ್ರಾಹ್ಮಣ ಮಹಾ ಸಭಾ- ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ

ನಮ್ಮ ಆಚಾರ ವಿಚಾರ,ಸಂಪ್ರದಾಯಆಚರಣೆಗಳು ನಮ್ಮ ಸನಾತನ ಸಂಸ್ಕ್ರತಿ ಯ ಮೂಲ ತತ್ವಗಳು, ಅವನ್ನು ಉಳಿಸಿ‌ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಧಾರ್ಮಿಕ ಚಿಂತಕರಾದ ಹಯವದನ ಭಟ್ ತೊಟ್ಟಂ ಅಭಿಪ್ರಾಯ ಪಟ್ಟರು.

ಕೊಡವೂರು ಬ್ರಾಹ್ಮಣ ಮಹಾ ಸಭಾದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ದೀಪ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ಸಮುದಾಯದ ಸದಸ್ಯರೆಲ್ಲ ಸೇರಿಕೊಂಡು ನಡೆಸುವ ಇಂತಹ ಕಾರ್ಯಕ್ರಮ ಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ ಹಾಗಾಗಿ ಆದಷ್ಟು ಇಂತಹ ಸಮಾರಂಭಗಳಲ್ಲಿ ಎಲ್ಲರೂ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿದರು. ಶ್ರುತಿ ಸುಕುಮಾರ್ ಪ್ರಾರ್ಥಿಸಿದರು. ಕೋಶಾಧಿಕಾರಿ ಶ್ರೀಧರ ಶರ್ಮ ಧನ್ಯವಾದವಿತ್ತರು. ಗೌರವಾಧ್ಯಕ್ಷರಾದ ಪಿ.ಗುರುರಾಜ್ ರಾವ್ ಉಪಸ್ಥಿತಿ ತರಿದ್ದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply