ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೋಟಿ ಕುಂಕುಮಾರ್ಚನೆಯ ಸೇವಾ ಕೌಂಟರ್ ಉದ್ಘಾಟನೆ

ಈ ದೇವಿಯ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕದ ಪ್ರಯುಕ್ತ ಶ್ರೀದೇವಿಗೆ ಜೀರ್ಣೋದ್ದಾರ ಸಮಿತಿಯ ವತಿಯಿಂದ ಕೋಟಿ ಕುಂಕುಮಾರ್ಚನೆಯನ್ನು ಏಪ್ರಿಲ್‌ ರಂದು ಹಮ್ಮಿಕೊಂಡಿರುತ್ತದ್ದು. ಈ ಪ್ರಯುಕ್ತ ಕೋಟಿ ಕುಂಕುಮಾರ್ಚನೆಯ ಸೇವಾ ಕೌಂಟರ್ ನ್ನು ಶ್ರೀ ದೇವಳದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯಾದ ಡಾ. ರೋಷನ್ ಕುಮಾರ್ ಶೆಟ್ಟಿ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಯಾದ ಕೆ.ಕೃಷ್ಣಮೂರ್ತಿ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸಂಜೀವ ಎ, ಅರ್ಚಕರಾದ ಗುರುರಾಜ್ ಉಪಾಧ್ಯಾಯ ಹಾಗೂ ಊರಿನ ಹಿರಿಯರು, ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply