ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮಂಗಳೂರಿನ ಹಂಪನಕಟ್ಟೆಯ ಹೆಚ್ ಡಿ ಎಫ್ ಸಿ(ಹೋಲ್ ಸೇಲ್ ಬ್ಯಾಕಿಂಗ್ ಆಪರೇಶನ್ಸ್) ಬ್ಯಾಂಕ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ,ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.
ಸಮೀಪದ ಬೋಂದೇಲ್ ಕ್ರೀಡಾಂಗಣದ ಹೊರಾವರಣ ಸ್ವಚ್ಚತಾ ಕಾರ್ಯಕ್ರಮದ ಜೊತೆಗೆ ತೇಗ,ಬೀಟೆ,ಹಲಸು,ಮಾವು ಮೊದಲಾದ ಗಿಡಗಳನ್ನು ನೆಡಲಾಯಿತು.
ಬ್ಯಾಂಕ್ ನ ಮಂಗಳೂರು ಸಿಟಿ ಹೆಡ್ ಮನೋಜ್ ಪುತ್ರನ್,ಹಿರಿಯ ಅಧಿಕಾರಿಗಳಾದ ಸಂತೋಷ್,ಕುಶಾಲಪ್ಪ ಸೇರಿದಂತೆ ಸಂಸ್ಥೆಯ ಉದ್ಯೋಗಿಗಳು ಪಾಲ್ಗೊಂಡಿದ್ದರು.