ಕ.ಸಾ.ಪದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ-2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿ. ಉಡುಪಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇವರ ಸಹಕಾರದೊಂದಿಗೆ ಜೂನ್ 30ರಂದು ಮಧ್ಯಾಹ್ನ 2.30 ಕ್ಕೆ ವೈದ್ಯರ ದಿನಾಚರಣೆ ಪ್ರಯುಕ್ತ ಜಿಲ್ಲೆಯ 10 ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಉಡುಪಿ ಜಿಲ್ಲೆಯ ಪ್ರಸಿದ್ಧ ವೈದ್ಯ ದಂಪತಿಗಳಾದ
ಉಡುಪಿಯ ಡಾ. ಕ್ಯಾಪ್ಟನ್ ಹೇಮಚಂದ್ರ ಹೊಳ್ಳ ಹಾಗೂ ಡಾ. ಸುಲೋಚನ ಹೊಳ್ಳ ,ಮಣಿಪಾಲ ಕೆ.ಎಂ.ಸಿ ಯ ನಿವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರಾನಂದ ಕುಮಾರ್ ಹಾಗೂ ಡಾ. ನಳಿನೀ ಭಾಸ್ಕರಾನಂದ ಕುಮಾರ್, ಹಿರಿಯಡ್ಕ ಕಾಮತ್ ಆಸ್ಪತ್ರೆಯ ಡಾ. ದೇವದಾಸ್ ಕಾಮತ್ ಹಾಗೂ ಡಾ. ಸುಧಾ ಡಿ. ಕಾಮತ್ , ಡಾ. ಎ. ವಿ ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಪಿ . ವಿ ಭಂಡಾರಿ ಹಾಗೂ ಡಾ. ಸುಲತಾ ಭಂಡಾರಿ , ಕಾರ್ಕಳದ ಬೈಲೂರಿನ ಗುರುಕೃಪಾ ನರ್ಸಿಂಗ್ ಹೋಂ ಇದರ ಡಾ. ರಾಮಕೃಷ್ಣ ನಾಯಕ್ ಹಾಗೂ ಡಾ.ಗೀತಾ ನಾಯಕ್, ಕೋಟೇಶ್ವರದ ಎನ್ . ಆರ್ ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ಡಾ. ಭಾಸ್ಕರ ಆಚಾರ್ಯ ಹಾಗೂ ಡಾ. ಸಬಿತಾ ಆಚಾರ್ಯ, ಕುಂದಾಪುರದ ಸರ್ಜನ್ ಆಸ್ಪತ್ರೆಯ ಡಾ. ಹೆಚ್. ವಿಶ್ವೇಶ್ವರ ಹಾಗೂ ಡಾ. ವನಿತಾಲಕ್ಷ್ಮಿ, ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಡಾ. ರಾಮಚಂದ್ರ ಐತಾಳ್ ಹಾಗೂ ಡಾ. ಭಾರ್ಗವಿ ಐತಾಳ , ಕುಂದಾಪುರದ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಹಾಗೂ ಮಧು ಮಯೂರಿ, ಉಡುಪಿಯ ಸುನಾಗ್ ಆಸ್ಪತ್ರೆಯ ಡಾ. ನರೇಂದ್ರಕುಮಾರ್ ಹೆಚ್. ಎಸ್ ಹಾಗೂ ಡಾ. ವೀಣಾ ನರೇಂದ್ರ ಕುಮಾರ್ ಇವರನ್ನು ಗೌರವ ಪುರಸ್ಕಾರ -2022 ನ್ನು ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕರಾದ ವಿಘ್ನೇಶ್ವರ ಅಡಿಗ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply