ಕುಂದಾಪುರ: ಕಿರಣ್ ಕೊಡ್ಗಿಗೆ ಅವಕಾಶ ಮಾಡಿ ಕೊಟ್ಟ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರದ ಶಾಸಕ, ಕರಾವಳಿಯ ವಾಜಪೇಯಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಸ್ಥಾನವನ್ನು ತನ್ನ ರಾಜಕೀಯ ಗುರು ದಿವಂಗತ ಎ.ಜಿ.ಕೊಡ್ಗಿಯವರ ಪುತ್ರ, ತನ್ನ ರಾಜಕೀಯ ಬಲಗೈ ಬಂಟ ಕಿರಣ್ ಕೊಡ್ಗಿಯವರಿಗೆ ಬಿಟ್ಟುಕೊಟ್ಟಿದ್ದಾರೆ.

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಸ್ವ ಇಚ್ಚೆಯಿಂದ ಕಿರಣ್ ಕೊಡ್ಗಿಯವರಿಗೆ ಅವಕಾಶ ನೀಡುವ ಮೂಲಕ ಎ.ಜಿ.ಕೊಡ್ಗಿಯವರ ಋಣ ತೀರಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.

ಇದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಧಿಕೃತವಾಗಿ ಕಿರಣ್ ಕೊಡ್ಗಿಯವರ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದ್ದು, ನಾಳೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪತ್ರಿಕಾಗೋಷ್ಟಿ ಕರೆಯುವ ಸಾಧ್ಯತೆಯಿದೆ.

 
 
 
 
 
 
 
 
 
 
 

Leave a Reply