ಪರಿಸರ ವೌಲ್ಯಮಾಪನ ಪ್ರಾದಿಕಾರ ಅಧ್ಯಕ್ಷರಾಗಿ ಬಿ.ಗುರುಪ್ರಸಾದ್ ನೇಮಕ

ರಾಜ್ಯ ಪರಿಸರ ವೌಲ್ಯಮಾಪನ ಪ್ರಾದಿಕಾರ (ಸ್ಟೇಟ್ ಎನ್ವಾರ್‌ಮೆಂಟ್ ಇಂಪ್ಯಾಕ್ಟ್ ಅಸಸ್ಮೆಂಟ್ ಅಥಾರಿಟಿ) ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಎಂಜಿನೀಯರ್ ಬಿ.ಗುರುಪ್ರಸಾದ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದಲ್ಲಿ 3 ದಶಕಗಳ ಕಾಲ ಎಂಜಿನೀಯರ್ ಹುದ್ದೆಯಿಂದ ಮುಖ್ಯ ಎಂಜಿನೀಯರ್ ತನಕ ನಾನಾ ಹುದ್ದೆಗಳಲ್ಲಿ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ, ಮೆಟ್ರೋ ಮತ್ತು ಏರ್ ಪೋರ್ಟ್ ಅಭಿವೃದ್ಧಿಗಾಗಿ ಬಿ.ಗುರುಪ್ರಸಾದ್ ಸಲ್ಲಿಸಿದ ಸೇವೆ ಪರಿಗಣಿಸಿ ಈ ಆಯ್ಕೆಯನ್ನು ಮಾಡಲಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಳುಹಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿ ಆದೇಶ ಹೊರಡಿಸಿದ್ದು, ಕೇಂದ್ರದ ಗೆಜೆಟೇರಿಯರ್‌ನಲ್ಲಿ ಪ್ರಕಟವಾಗಿದೆ. ಪ್ರಾದಿಕಾರದ ಸದಸ್ಯರಾಗಿ ಎಚ್.ಎಂ.ಲಕ್ಷ್ಮಿಕಾಂತ ಅವರು ನೇಮಕವಾಗಿದ್ದಾರೆ.

 
 
 
 
 
 
 
 
 
 
 

Leave a Reply