ನಿವೃತ್ತ ಉದ್ಯೋಗಿಗಳಿಗೆ ಅಭಿನಂದನೆ

ಯಕ್ಷಗಾನ ಕಲಾರಂಗದಲ್ಲಿ ಸುಮಾರು ಎರಡು ದಶಕ ಉದ್ಯೋಗಿಯಾಗಿ ವಿಶೇಷವಾಗಿ ಕಂಪ್ಯೂಟರ್ ಕೆಲಸದಲ್ಲಿ ನಿಷ್ಣಾತರಾಗಿದ್ದ ಮಂಜುನಾಥ ಮತ್ತು ಐದು ವರ್ಷ ಕಛೇರಿ ಸಹಾಯಕಳಾಗಿ ಸೇವೆ ಸಲ್ಲಿಸಿದ ಸಂಗೀತಾ ಇವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಸಂಸ್ಥೆಯ ಕಛೇರಿಯಲ್ಲಿ ಸೇರಿದ ಕಾರ್ಯಕಾರೀ ಸಮಿತಿ ಸಭೆಯಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಇಬ್ಬರ ಸೇವೆಯನ್ನು ಸ್ಮರಿಸಿ ಕೊಂಡರು. ಅಧ್ಯಕ್ಷ ಎಂ ಗಂಗಾಧರ ರಾವ್ ಶಾಲು,ಸ್ಮರಣಿಕೆ, ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

 
 
 
 
 
 
 
 
 
 
 

Leave a Reply