ಶಾಸಕರ ಮೇಲೆ ದಾಳಿ ಯತ್ನ ಖಂಡನೀಯ~ ಶ್ರೀನಿಧಿ ಹೆಗ್ಡೆ

ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಮಾರಕಾಯುಧ ತೋರಿಸಿ, ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ಕೃತ್ಯ ಹೇಡಿತನದ್ದು ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.

ಹಲವಾರು ಅಭಿವೃದ್ಧಿ ಕೆಲಸ ಮಾಡುತ್ತಾ ಜನಾನುರಾಗಿಯಾಗಿ ಹೆಸರು ಮಾಡಿರುವ ಬೆಳ್ತಂಗಡಿ ಶಾಸಕರ ಮೇಲೆ ದಾಳಿ ಮಾಡಲು ಯತ್ನಿಸಿರುವುದು ಖಂಡನೀಯ. ಹಿಂದು ಸಮಾಜದ ಮುಖಂಡರನ್ನು, ಬಿಜೆಪಿ ಕಾರ್ಯಕರ್ತರನ್ನು, ಶಾಸಕರನ್ನು ಬೆನ್ನಟ್ಟಿ, ಬೆದರಿಸುವ ಮೂಲಕ ಜಿಹಾದಿಗಳು ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಇಂತಹ ಕೃತ್ಯವನ್ನು ಭೇದಿಸಿ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಕರಂದ್ಲಾಜೆಗೂ ಬೆದರಿಕೆ ಕರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ವಿದೇಶಿ ಬೆದರಿಕೆ ಕರೆ ಬರುತ್ತಿದ್ದು, ಪಿಎಫ್‌ಐ ನಿಷೇಧದ ಬಳಿಕ ನಿರಂತರ ಕರೆ ಬರುತ್ತಿದೆ. ಇದು ಕೂಡ ಖಂಡನೀಯ. ಪೊಲೀಸರು ವಿದೇಶಿ ಕರೆಗಳ ಮೂಲ ಜಾಲಾಡಿಸಿ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷೆ ಕೊಡಬೇಕು. ಮತಾಂಧ ಶಕ್ತಿಗಳು ಮತ್ತೊಮ್ಮೆ ಇಂಥ ಹೇಯ ಕೃತ್ಯಕ್ಕಿಳಿಯದಂತೆ ಎಚ್ಚರಿಕೆ ರವಾನಿಸುವ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶ್ರೀನಿಧಿ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply