ರಾಮಚಂದ್ರ ಜಿ. ನಾಯ್ಕ ನಿಧನ

ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹೆಮ್ಮಾನಬೈಲ್‌ನ ರಾಮಚಂದ್ರ ಜಿ. ನಾಯ್ಕ (೫೪ ವರ್ಷ) ಅವರು ೨೦.೦೯.೨೦೨೩ರಂದು ನಿಧನರಾದರು.

೩೨ ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ ಕಲಾಸೇವೆ ಮಾಡಿದ್ದರು. ಕಳೆದ ವರ್ಷ ಸಿಗಂಧೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆಗೈದಿದ್ದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಕೆ. ಪಿ. ಹೆಗಡೆ, ಸದಾನಂದ ಐತಾಳ್ ಅವರಿಂದ ಭಾಗವತಿಕೆಯ ತರಬೇತಿ ಪಡೆದಿದ್ದರು.

ಗೋಳಿಗರಡಿ, ರಂಜದಕಟ್ಟೆ ತೀರ್ಥಹಳ್ಳಿ, ಅಮೃತೇಶ್ವರಿ, ಹಾಲಾಡಿ, ಪೆರ್ಡೂರು, ಮಡಾಮಕ್ಕಿ, ಆಜ್ರಿ, ಕುಮಟಾ, ಸಾಲಿಗ್ರಾಮ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದಾರೆ.

ಹೆಂಡತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply