ಪುತ್ತಿಗೆ ಪರ್ಯಾಯ ಈಸೀ ಇವೆಂಟ್ಸ್ ಮೊಬೈಲ್ ಆ್ಯಪ್ ಅದೃಷ್ಟಶಾಲಿ ವಿಜೇತರ ಆಯ್ಕೆ

ಪುತ್ತಿಗೆ ವಿಶ್ವ ಗೀತಾ ಪರ್ಯಾಯದ ಪ್ರಯುಕ್ತ ಈಸೀ ಇವೆಂಟ್ಸ್ ಮೊಬೈಲ್ ಆ್ಯಪ್ ಸಂಸ್ಥೆ ನಡೆಸಿದ ಲಕ್ಕಿಡ್ರಾ ಸ್ಪರ್ಧೆಯ ವಿಜೇತರನ್ನು ಶ್ರೀ ಪುತ್ತಿಗೆ ಮಠಾದೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಮಠಾದೀಶರಾದ ಶ್ರೀ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಆರಿಸಲಾಯಿತು.

ಅದೃಷ್ಟಶಾಲಿ ಮೊಬೈಲ್ ಫೋನ್ ವಿಜೇತರು – 

1. ಶ್ರೀಮತಿ ಶ್ಯಾಮಲಾ ಹಳವಳ್ಳಿ   

2. ಶ್ರೀ ರವಿ ಜೋನಾಜಿ

ವಿಶ್ವ ಗೀತಾ ಪರ್ಯಾಯದ ಎಲ್ಲಾ ಸುಂದರ ಕ್ಷಣಗಳ ಫೋಟೋ, ವಿಡಿಯೋ ಹಾಗೂ ಕಾರ್ಯಕ್ರಮದ ಎಲ್ಲಾ ಲೈವ್ ಲಿಂಕ್ಸ್ ಗಳನ್ನು ವೀಕ್ಷಕರಿಗೆ ಸದಾ ನೋಡಲು ಈಸೀ ಇವೆಂಟ್ಸ್ ಮೊಬೈಲ್ ಆ್ಯಪ್ ನ್ನು ಡೌನ್ ಲೋಡ್ ಮಾಡಿ ನೋಡಬಹುದಾಗಿದೆ.

ಈಸೀ ಇವೆಂಟ್ಸ್ ಮೊಬೈಲ್ ಆ್ಯಪ್ ತಂಡದಿಂದ ಚಿತ್ರನಟ ನಿರ್ದೇಶಕ ರಜನೀಶ್ ದೇವಾಡಿಗ, ಚರಣ್ ಕೋಟ್ಯಾನ್, ಮನೀಶ್, ನಾಗರಾಜ್ ಆಚಾರ್, ಶ್ರವಣ್ ಹೆಬ್ಬಾರ್, ಭರತ್, ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply