ಕಾರ್ಕಳ : ಯುವಕ ನಾಪತ್ತೆ

ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕನೊಬ್ಬ ಕಾಣೆಯಾದ ಘಟನೆ ಪೊತ್ತೊಂಜಿಕಟ್ಟೆ ಗುಂಡ್ಯಾ ಮನೆ ಪೆರ್ವಾಜೆ ಕಾರ್ಕಳ ಕಸಬ ಗ್ರಾಮ ಇವರು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಯಲ್ಲಿ ನಡೆದಿದೆ.

ಪ್ರಸಾದ (25)  ನಾಪತ್ತೆಯಾದ ಯುವಕ .

4 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಸೆ.16 ರ ಬೆಳಗ್ಗೆ. ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಮಲಗಿಕೊಂಡಿದ್ದ ಮಗ ಪ್ರಸಾದನು ಮನೆಯಲ್ಲಿ ಇಲ್ಲದೇ ಇದ್ದು ಸಂಬಂಧಿಕರ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿ ಹುಡುಕಾಡಿದರು ಪತ್ತೆಯಾಗದೇ ಇರುವುದರಿಂದ ದಿನ ತಡವಾಗಿ ಠಾಣೆಗೆ ಬಂದು ದೂರು‌ನೀಡಿದ್ದಾರೆ.

ಕಾಣೆಯಾದವರ ಚಹರೆ ಗುರುತು ಎತ್ತರ: ಸುಮಾರು 5 ಅಡಿ 7 ಇಂಚು ಗೋಧಿ ಮೈಬಣ್ಣ , ಬಟ್ಟೆಗಳು : ಆಕಾಶ ನೀಲಿ ಬಣ್ಣದ ಶರ್ಟ್‌, ಕಪ್ಪು ಬಣ್ಣದ ಜೀನ್ಸ್‌ ಪ್ಯಾಂಟ್‌ ಭಾಷೆ:  ಕನ್ನಡ ತುಳು ಮಾತನಾಡುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

 
 
 
 
 
 
 
 
 
 
 

Leave a Reply