ಬ್ರಹ್ಮಾವರದ ಆಕಾಶವಾಣಿ ಸರ್ಕಲ್ ಸಮೀಪ ಎಲೆಕ್ನಿಕ್ ಸ್ಕೂಟರೊಂದು ಧಗಧಗನೆ ಉರಿದ ಘಟನೆ ಸಂಭವಿಸಿದೆ. ರಸ್ತೆ ಬದಿನಿಲ್ಲಿಸಿದ್ದಾಗ ಈ ದುರ್ಘಟನೆ ಸಂಭವಿಸಿದ್ದು ಯಾರಿಗೂ ಅಪಾಯ ಉಂಟಾಗಿಲ್ಲ.
ರಸ್ತೆ ಬದಿ ಸ್ಕೂಟರ್ ಹೊತ್ತಿ ಉರಿಯುತ್ತಿರುವಾಗ ನೂರಾರು ಜನ ಅದನ್ನೇ ತದೇಕಚಿತ್ತದಿಂದ ನೋಡಿ ಆತಂಕಗೊಂಡರು. ಕರಾವಳಿಯಲ್ಲಿ ಉರಿಬಿಸಿಲಿನ ಧಗೆ ಇರುವುದರಿಂದ ಕ್ಷಣಾರ್ಧದಲ್ಲೇ ಸ್ಕೂಟರ್ ಹೊತ್ತಿ ಭಸ್ಮವಾಯಿತು.