ಶ್ರೀ ಭಗವತಿ ಬ್ರಹ್ಮಕಲಶೋತ್ಸವ ಸೇವಾ ರಶೀದಿ ಬಿಡುಗಡೆ

ದಿನಾಂಕ 26.02.2023 ಆದಿತ್ಯವಾರ ಉಪ್ಪುಂದದಲ್ಲಿ ಶ್ರೀಮದ್’ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಇವರು, ಕುಂದಾಪುರ ವಲಯದ ಶಿಷ್ಯ ವೃಂದದವರು ಹಮ್ಮಿಕೊಂಡ ಗುರು ಭಿಕ್ಷಾ ಸೇವಾ ಸಂದರ್ಭದಲ್ಲಿ ಶ್ರೀ ಭಗವತಿ ದುರ್ಗಾಪರಮೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠೆ ಅಷ್ಟಬಂದ ಬ್ರಹ್ಮಕಲಶೋತ್ಸವದ ಸೇವಾ ರಶೀದಿಗಳನ್ನು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಗೊಳಿಸಿದರು. ಹಾಗೆಯೇ ಶ್ರೀ ಸಂಸ್ಥಾನದಿಂದ ಕನಕಾಭಿಷೇಕ ಸೇವೆಯ ಬಾಬ್ತು ದೇಣಿಗೆಯನ್ನು ಪಾವತಿಸಿ, ಪ್ರಥಮ ರಶೀದಿಯನ್ನು ಪಡೆದು ವಿದ್ಯುಕ್ತವಾಗಿ ಸೇವೆಗೆ ಚಾಲನೆ ನೀಡಿದರು.ಆಗಮಿಸಿದ ಸಮಿತಿಯ ಸದಸ್ಯರಿಗೆ ಫಲಮಂತ್ರಾಕ್ಷತೆಯನ್ನು
ನೀಡಿ,ದೇವಾಲಯವು ಹಮ್ಮಿಕೊಂಡ ಎಲ್ಲಾ ದೇವತಾಕಾರ್ಯಗಳು ಶುಭ ಯಶಸ್ಸಿನೊಂದಿಗೆ ಸಂಪನ್ನಗೊಳ್ಳಲಿ ಎಂದು ದೇವತಾನುಗ್ರಹ ಕೋರಿ ಹರಸಿ ಆಶೀರ್ವದಿಸಿದರು.

 
 
 
 
 
 
 
 
 
 
 

Leave a Reply