ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಉಡುಪಿ ರಾಮಕೃಷ್ಣ ಹೆಗಡೆ ಸ್ಕಿಲ್ ಡೆವೆಲಪ್‌ಮೆಂಟ್ ಸೆಂಟರ್ ಉಡುಪಿ ಪ್ರಾಯೋಜಿತ ೨ ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವು ಉಡುಪಿ ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ೨ನೇ ಬ್ಯಾಚ್‌ ಫಲಾನುಭವಿಗಳಾದ ಅಂತಿಮ ಬಿ.ಕಾಂ ʼಎʼ ವಿದ್ಯಾರ್ಥಿನಿಯರಿಗೆ ನಡೆಸಲಾಯಿತು. 

ಸಮಾರೋಪದಲ್ಲಿ ಕೊಂಕಣ ರೈಲ್ವೆ ವಿಭಾಗದ ಸೀನಿಯರ್ ತರಬೇತುದಾರ ಶ್ರೀಧರ್ ಅವಭೃತ ಮತ್ತು ಕೊಂಕಣ ರೈಲ್ವೆ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಪ್ರಮಾಣ ಪತ್ರವನ್ನು ನೀಡಿದರು. ಪ್ರಾಂಶುಪಾಲರು ಪ್ರೊ. ಭಾಸ್ಕರ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸಿದರು.ಕಾಕ್ರಮದ ಸಂಯೋಜಕರಾದ ಡಾ ಉಮೇಶ್ ಮಯ್ಯ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. ಮತ್ತು ಸಹಸಂಚಾಲಕ ಜ್ಯೋತಿ ಎಲ್‌ ಆರ್‌ ಜನ್ನೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply