ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾ ವತಿಯಿಂದ ವಲಯದ 30 ಅರ್ಹ ಕುಟುಂಬಗಳಿಗೆ ಆರ್ಥಿಕ ನೆರವು 

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾ ವತಿಯಿಂದ ಕೊರೋನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ವಲಯದ 30 ಅರ್ಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮವು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನದಲ್ಲಿ ಜರುಗಿತು.

ಫಲಾನುಭವಿಗಳಿಗೆ ಧನ ಸಹಾಯ ವಿತರಿಸಿದ ಸಭಾದ ಗೌರವಾಧ್ಯಕ್ಷ ಡಾ.ಸಿ ಗೋಪಾಲಕೃಷ್ಣ ಬಲ್ಲಾಳ್ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರೋಗ್ಯದ ಕುರಿತು ಜಾಗ್ರತೆಯಲ್ಲಿರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಭಾದ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಮಧ್ವರಾಯ ಭಟ್ , ಖಜಾಂಜಿ ವೆಂಕಟೇಶ್ ಪದಾಧಿಕಾರಿಗಳಾದ ಪ್ರೊ ವೇಣುಗೋಪಾಲ ಮುಳ್ಳೇರಿಯ,  ವಿಶ್ವನಾಥ ಬಾಯರಿ,  ವಿಠ್ಠಲ ಭಟ್, ಅನಂತಕೃಷ್ಣ ಕೊಡ್ಲಾಯ, ಸತ್ಯನಾರಾಯಣ ರಾವ್  ಶ್ರೀವತ್ಸ ಆಚಾರ್ಯ, ಗೋಪಾಲಕೃಷ್ಣ ಭಟ್ , ಪದ್ಮನಾಭ ಮದ್ಯಸ್ಥ ಮುಂತಾದವರು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply