ಉಡುಪಿ ಕುಂಜಿಬೆಟ್ಟು ಸಿಎ ಭವನಕ್ಕೆ ಮಂಗಳವಾರ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ಭೇಟಿ ನೀಡಿದರು.
ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು, ಭಾರತ ದೇಶದ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧ ಕರ ಪಾತ್ರ ಮಹತ್ವದಾಗಿದೆ ,ದೇಶದಲ್ಲಿ ಹೊಸದಾಗಿ ಸಿಎ ಪಾಸ್ ಯುವ ಲೆಕ್ಕಪರಿಶೋಧಕರ ಅವ್ಯಶಕತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ರೂಪಿಸುವಂತೆ ಕರೆ ನೀಡಿದರು , ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯ ನೆಡೆಸಿದರು. ಸಮಾರಂಭದಲ್ಲಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎ.ಕೋತಾ ಎಸ್.ಶ್ರೀನಿವಾಸ್, ಸಿ.ಎ.ಪ್ರಸನ್ನ ಕುಮಾರ್, ಸಿ.ಎ.ಮಂಗೇಶ್ ಕಿನಾರೆ, ಸಿ.ಎ.ಗೀತಾ ಎ.ಬಿ. ಹಾಗೂ ಉಡುಪಿ ಸಿ.ಎ.ಸಂಸ್ಥೆಯ ಅಧ್ಯಕ್ಷ ಸಿ.ಎ.ಮಹೇಂದ್ರ, ಸ್ಥಾಪಕ ಅಧ್ಯಕ್ಷ ಸಿ.ಎ.ಗುಜ್ಜಾಡಿ ಪ್ರಭಾಕರ ನಾಯಕ್, ಸಿಎ ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.