ಆರ್ಟ್ ಮತ್ತು ಆರ್ಟಿಕಲ್ಸ್ ಪುಸ್ತಕ ಬಿಡುಗಡೆ ಸಮಾರಂಭ

ಸುನಾಗ್ ಆಸ್ಪತ್ರೆ ಕುಂಜಿಬೆಟ್ಟು ಉಡುಪಿ ಇವರ ಆಶ್ರಯದಲ್ಲಿ ಸುನವ್ಯ ಮತ್ತು ಸಂಹಿತ ಇವರ ಆರ್ಟ್ ಮತ್ತು ಆರ್ಟಿಕಲ್ಸ್ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಇದೇ ಬರುವ 9ನೇ ತಾರೀಕು ಸೋಮವಾರ ಸಂಜೆ 5 ಗಂಟೆಗೆ ಉಡುಪಿ ಕಡಿಯಾಳಿಯ ಭರತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

ಸಭಾಧ್ಯಕ್ಷತೆಯನ್ನು ಡೆಂಟಾ ಕೇರ್ ನಿರ್ದೇಶಕ ಡಾ| ವಿಜಯೇಂದ್ರ ರಾವ್ ವಹಿಸಲಿದ್ದು, ಮಣಿಪಾಲ ಕೆಎಂಸಿಯ ಮೂಳೆ ರೋಗ ತಜ್ಞರಾದ ಡಾ| ಕಿರಣ್ ಆಚಾರ್ಯ ಪುಸ್ತಕದ ಪರಿಚಯವನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ | ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕರಾಗಿರುವ  ಡಾ| ಪಿ. ವಿ ಭಂಡಾರಿಯವರು ಇರುತ್ತಾರೆ.

ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಸುನಾಗ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ನರೇಂದ್ರ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply