ಗೋಸಂರಕ್ಷಣಾ ಜಾಗೃತಿ ವೇದಿಕೆ ಬಾರ್ಕೂರು ವತಿಯಿಂದ ಗೋಪೂಜೆ

ಗೋಸಂರಕ್ಷಣಾ ಜಾಗೃತಿ ವೇದಿಕೆ ಬಾರ್ಕೂರು ಇವರ ವತಿಯಿಂದ ಈ ಭಾರಿ ಹನ್ನೊಂದನೇ ವರ್ಷದ ಗೋಪೂಜೆಯನ್ನು ಇಂದು ಬಾರ್ಕೂರು ಕೋಟೆಕೇರಿ ಮಹತೋಬಾರ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಯಿತು.

ದೇವಸ್ಥಾನದ ಅರ್ಚಕರಾದ ಶ್ರೀ ವೆಂಕಟರಮಣ ಭಟ್ ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಶಾಂತರಾಮ ಶೆಟ್ಟಿ,ಆಡಳಿತ ಮೊಕ್ತೇಸರರಾದ ಶ್ರೀ ಮಂಜುನಾಥ ರಾವ್, ಗೋ ಸಂರಕ್ಷಣಾ ಜಾಗೃತಿ ವೇದಿಕೆಯ ಮುಖ್ಯಸ್ಥರಾದ
ಶ್ರೀ ಶ್ರೀಧರ ಆಚಾರ್ಯ ಸಂತೆ ಗುಡ್ಡೆ ಬಾರ್ಕೂರು, ಶ್ರೀ ಬಿ ಸುಧಾಕರ ಬಾರ್ಕೂರು, ಶ್ರೀಕಾಂತ್ ಆಚಾರ್ ಬಾರ್ಕೂರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತನಾಡಿದ
ಶ್ರೀ ಬಿ.ಶಾಂತರಾಮ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಗಂಡು ಕರುವನ್ನು ನಿರ್ಲಕ್ಷಿಸಿ ಎಲ್ಲೆಂದರಲ್ಲಿ ಬಿಟ್ಟು ಬಿಡುವುದರಿಂದ ಸಾರ್ವಜನಿಕರಿಗೆ *ತೊಂದರೆ ಉಂಟಾಗುತ್ತಿದ್ದು, ಗಂಡು ಕರುವನ್ನು ನಿರ್ಲಕ್ಷ ಮಾಡದೇ ಎಲ್ಲರೂ ಪೋಷಿಸುವಂತೆ ಆಗಬೇಕು ಸಾಧ್ಯವಾಗದಿದ್ದಲ್ಲಿ ಸಮೀಪದ ಗೋಶಾಲೆಗೆ ನೀಡ ಬೇಕೆಂದು ವಿನಂತಿಸಿ ಕೊಂಡರು

ಶ್ರೀ ಬಿ.ಸುಧಾಕರ್ ರಾವ್ ಅವರು ಅವರು ಕಾರ್ಯಕ್ರಮವನ್ನು ನಿರೂಪಿಸಿ,ಶ್ರೀಧರ ಆಚಾರ್ಯ ಅವರು ವಂದಿಸಿದರು

ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಕಾಶಿಯ ಪವಿತ್ರ ಗಂಗಾ ತೀರ್ಥವನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply