ಗುರುಮನೆ- ಅರಮನೆ ಸಂಬ೦ಧ ಮುಖ್ಯ: ದೇಗುಲದ ನೂತನ ವಿನ್ಯಾಸದ ಗೋಡೆ ಅನಾವರಣಗೊಳಿಸಿದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಗುರುಮನೆ- ಅರಮನೆ ಪವಿತ್ರ ಸಂಬ೦ಧ ಇದ್ದರೆ ನಾಡು ಸುಭಿಕ್ಷೆಯಾಗಿರುತ್ತದೆ ಎಂದರು.
ಆಡಳಿತ ವ್ಯವಸ್ಥೆಗೆ ಧರ್ಮದ ಸೂತ್ರಗಳನ್ನು ಅಳವಡಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನುಡಿದರು. ಮೈಸೂರು ಅರಸರು ಈ ಬದ್ಧತೆಯನ್ನು ರೂಢಿಸಿಕೊಂಡ ಕಾರಣ ಇಡೀ ವಿಶ್ವಕ್ಕೆ ಮೈಸೂರು ಮಾದರಿ ರಾಜ್ಯವಾಗಿದೆ. ನಮ್ಮ ಸನಾತನ ಧರ್ಮ, ಸಂಸ್ಕೃತಿಯಲ್ಲಿರುವ ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿ ಕ್ಷಣವೂ ನಮ್ಮದಾಗಿಸಿಕೊಳ್ಳಲು ಯತ್ನ ಮಾಡಬೇಕು.