ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಮತದಾನ~ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

ಉಡುಪಿ, ಮೇ 10: ಭಾವಿ ಪರ್ಯಾಯ ಮಠಾಧೀಶರಾದ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಉಡುಪಿಯ ಪಣಿಯಾಡಿ ಶ್ರೀ ಅನಂತೇಶ್ವರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಮತದಾನ. ನಮ್ಮ ದೇಶದ ರಕ್ಷಣೆಗೆ ಇರತಕ್ಕ ಜವಾಬ್ಧಾರಿಯನ್ನು ನಿರ್ವಹಿಸತಕ್ಕಂತಹ ಈ ಒಂದು ದಾನ ಅತ್ಯಂತ ಶ್ರೇಷ್ಠವಾದದ್ದು.

ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಭಾವನೆ ಸರಿಯಲ್ಲ. ಅದೇ ರೀತಿ ಯಾರೂ ಒಳ್ಳೆಯವರಿಲ್ಲ ಅದರಿಂದ ನಾವು ಓಟು ಹಾಕುವುದಿಲ್ಲ ಎನ್ನುವ ಭಾವನೆಯೂ ಸರಿಯಲ್ಲ. ಇದ್ದದರಲ್ಲಿ ಒಳ್ಳೆಯವರನ್ನು ಆಯ್ಕೆ ಮಾಡುವುದು ದೇಶದ ಹಿತರಕ್ಷಣೆಗೆ ಮಾಡುವ ಎಲ್ಲರ ಕರ್ತವ್ಯವಾಗಿದೆ. ಈ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಕೂಡ ಈ ಮತಾದಾನದ ಜವಾಬ್ದಾರಿಯನ್ನು ಪೂರ್ಣಗೊಳಿಸುವ ಮೂಲಕ ದೇಶದ ರಕ್ಷಣೆ ದೇಶದ ಸಂಸ್ಕೃತಿಗೆ ಕಾರಣರಾಗಬೇಕು ಎಂದರು.

 

 
 
 
 
 
 
 
 
 
 
 

Leave a Reply