ಪಣಿಯೂರು ಶ್ರೀ ದುರ್ಗಾ ದೇವಿ ಶಾಲೆಯಲ್ಲಿ ಸಮ ವಸ್ತ್ರ ವಿತರಣೆ

ಪಣಿಯೂರು ಶ್ರೀ ದುರ್ಗಾ ದೇವಿ ಶಾಲೆಯ ಮಕ್ಕಳಿಗೆ ಬೆಟ್ಟಿಗೆ ಶ್ರೀ ನಿರಂಜನ ತಂತ್ರಿ(ದುಬೈ) ಇವರು ಸುಮಾರು 30 ಸಾವಿರ ರೂಪಾಯಿ ಮೊತ್ತದ ಸಮವಸ್ತ್ರ ವನ್ನು ದಾನವಾಗಿ ನೀಡಿರುತ್ತಾರೆ. 
 
ಸಮವಸ್ತ್ರ ವಿತರಣಾ ಕಾರ್ಯಕ್ರಮ ನಿನ್ನೆ ಶಾಲಾ ಆವರಣದಲ್ಲಿ ಸಂಚಾಲಕ ದೇವರಾಜ ರಾವ್ ನಡಿಮನೆ ಯವರ ಅಧ್ಯಕ್ಷತೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿರಂಜನ ತಂತ್ರಿ ಯವರ ಸಹೋದರರಾದ  ಬೆಟ್ಟಿಗೆ ಸುರೇಶ್ ತಂತ್ರಿ, ಸಹೋದರಿ ಶ್ರೀಮತಿ ವಾಣಿ ರಾಧಾಕೃಷ್ಣ, ಪಂಚಾಯತ್ ಸದಸ್ಯ ಪ್ರಕಾಶ್ ಪಟೇಲ್, ಉದ್ಯಮಿ ಮನೋಹರ್ ರಾವ್, ಶಾಲಾ ಎಸ್ ಡಿ ಏಮ್ ಸಿ ಸದಸ್ಯ ಬೋಜ ದೇವಾಡಿಗ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 
 

Leave a Reply