ಉಡುಪಿ: ಲೆಕ್ಕ ಪರಿಶೋಧಕರ ಸಂಸ್ಥೆ ಕುಂಜಿಬೆಟ್ಟು ವತಿಯಿಂದ 73 ನೇ ಸಿ.ಎ ಡೇ ಆಚರಣೆಯಅಂಗವಾಗಿ ಶಾಖೆ ಕಚೇರಿಯಲ್ಲಿ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಸಹಾಯಕ್ಕೆ ನೆರವು ನೀಡುತ್ತಿರುವ ದಿವ್ಯಾಂಗ ರಕ್ಷಣಾ ಸಮಿತಿಯ ಉಡುಪಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಮೂಲಕ ಲೆಕ್ಕ ಪರಿಶೋದಕರ ಅಧ್ಯಕ್ಷೆ ಸಿ ಎ ಕವಿತಾ ಪೈ ವಿಲ್ ಚೆರ್ ಹಸ್ತಾಂತರಿಸಿದರು.
ಸೇವಾ ಭಾರತಿ ಕನ್ಯಾಡಿ ನೆಡೆಸುತ್ತಿರವ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯ ಸುಮಾರು 60 ಜನರಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆ ಹಾಗು ತರಬೇತಿ ನೀಡುತ್ತಿದೆ.ಕಾರ್ಯದರ್ಶಿ ಸಿ ಎ ಪ್ರದೀಪ್ ಜೋಗಿ, ಸಿ ಎ ಗುಜ್ಜಾಡಿ ಪ್ರಭಾಕರ್ ನಾಯಕ್,ಸಿ ಎ ಲೋಕೇಶ್ ಶೆಟ್ಟಿ, ಲೆಕ್ಕ ಪರಿಶೋಧಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.