ಉಡುಪಿ : ಆಸ್ಪತ್ರೆ, ಆಶ್ರಮಗಳಿಗೆ ಹಣ್ಣು ಹಂಪಲು ಕಿಟ್ ವಿತರಣೆ

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇದರ ನೇತೃತ್ವ ದಲ್ಲಿ ವಿಜಯ ಪೇಪರ್ ಮಾಲಕರಾದ ಸತೀಶ್ ಶೆಣೈ ಯವರ ಪ್ರಾಯೋಜಕತ್ವ ದಲ್ಲಿ ಜಿಲ್ಲಾ ಆಸ್ಪತ್ರೆ, ಸ್ಪಂದನ ವಿಶೇಷ ಮಕ್ಕಳ ಆಶ್ರಮ ಉಪ್ಪುರು ಹಾಗೂ ನೇಜಾರು ಹಾಗೂ ಕೃಷ್ಣಾನುಗ್ರಹ ಮಕ್ಕಳ ಆಶ್ರಮ ಲಕ್ಷ್ಮಿನಗರ ಇಲ್ಲಿಗೆ ಸುಮಾರು 300 ಹಣ್ಣು ಹಂಪಲು ಕಿಟ್ ವಿತರಿಸಲಾಯಿತು. ಮುಖ್ಯ ಅತಿಥಿ ಯಾಗಿ ಜಿಲ್ಲಾ ವೈದ್ಯಧಿಕಾರಿ ಭಾಗವಹಿಸಿದ್ದರು. ಅಧ್ಯಕ್ಷರಾದ ಪ್ರಕಾಶ್ ಜಿ, ಕೊಡವೂರು ರಾಜ್ಯ ಸಮನ್ವಯ ಸಮಿತಿಯ ಸಂಚಾಲಕರದ ಎಮ್ ಮಹೇಶ್ ಕುಮಾರ್, ವಲಯ ಸಂಚಾಲಕರದ ಅಶೋಕ್ ಶೆಟ್ಟಿ, ಮುದ್ರಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಬಿ ಜಿ ಸುಬ್ಬರಾವ್ ಉಡುಪಿ, ವಲಯ ಅಧ್ಯಕ್ಷರಾದ ಪ್ರಶಾಂತ್ ಕುಮಾರ್, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ವಿಜಯ ಪೇಪರ್ಸ್ ಮಾಲಕರಾದ ಸತೀಶ್ ಶೆಣೈ ಮತ್ತು ಸಮಿತಿ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply