ಎಸ್ ಕೆಪಿಎ ಬಂಟ್ವಾಳ ವಲಯದ ಆಶ್ರಯದಲ್ಲಿ ವಲಯಮಟ್ಟದ ಕ್ರೀಡಾಕೂಟ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ವಲಯಮಟ್ಟದ ಕ್ರೀಡಾಕೂಟ ಇನ್ಫ್ಯಾಂಟ್ ಜೀಸಸ್ ಚರ್ಚ್ ಮೈದಾನ ಮೊಡಂಕಾಪು ಇಲ್ಲಿ ನಡೆಯಿತು,

ಇನ್ಫ್ಯಾಂಟ್ ಜೀಸಸ್ ಚರ್ಚಿನ ಪ್ರಧಾನ ಗುರುಗಳಾದ ವಲೇರಿಯನ್ ಡಿಸೋಜಾ ಇವರು ಕ್ರೀಡಾ ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭವನ್ನು ಹಾರೈಸಿದರು, ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಸ್ನೇಹ ಮತ್ತು ಸಂಘಟನೆಗಾಗಿ ಕ್ರೀಡಾಕೊಟವನ್ನು ಆಯೋಜಿಸಿದಕ್ಕಾಗಿ ವಲಯವನ್ನು ಅಭಿನಂದಿಸಿದರು.

ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷರಾದ ಕಿಶೋರ್ ಎಸ್ ಕುಮಾರ್ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಉದ್ಯಮಿ ರೋ. ಮೊಹಮ್ಮದ್ ಹನೀಫ್ ಬ್ರಹ್ಮ್ಮರಕೊಟ್ಲು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಏನ್ ಬಂಟ್ವಾಳ,ಜಿಲ್ಲಾ ಉಪಾಧ್ಯಕ್ಷ ಕಲಾಶ್ರೀ ರಮೇಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಭಾರದ್ವಾಜ್, ರಂಜಿತ್ ಮೆಂಡನ್, ಗೌರವ ಅಧ್ಯಕ್ಷರಾದ ಹರೀಶ್ ಕುಂದರ್ ಭಾಗವಹಿಸಿದ್ದರು.

ವಲಯದ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಕೋಶಾಧಿಕಾರಿ ವರುಣ್ ಕಲ್ಲಡ್ಕ, ವಲಯ ಕ್ರೀಡಾಕಾರ್ಯದರ್ಶಿಗಳಾದ ಮೋಹನ್ ಮತ್ತು ಹರೀಶ್ ಕನ್ಯಾನ, ವೇದಿಕೆಯಲ್ಲಿ ಉಪಸ್ಥಿತರಿದ್ದರು, ವೀಕ್ಷಕ ವಿವರಣೆಯನ್ನು ಭಾಸ್ಕರ್ ನೀಡಿದರು, ದಯಾನಂದ್ ಬಂಟ್ವಾಳ್ ಮತ್ತುರಾಜೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾಕೂಟವು ಕ್ರಿಕೆಟ್, ವಾಲಿಬಾಲ್ ಮತ್ತು ಹಗ್ಗಜಗ್ಗಾಟವನ್ನು ಒಳಗೊಂಡಿತ್ತು

 
 
 
 
 
 
 
 
 
 
 

Leave a Reply