ಬೃಹತ್ ರಕ್ತದಾನ ಶಿಬಿರ

 ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಮಿಡ್ ಟೌನ್, ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಕುಂದಾಪುರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಉಡುಪಿ ಹಾಗೂ ಉಡುಪಿ  ಕೊಚ್ಚಿನ್ ಶಿಪ್ ಯಾರ್ಡ್  ಇವರ ಸಹಯೋಗದಲ್ಲಿ ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ ಮಲ್ಪೆ ಇಲ್ಲಿ ತಾರೀಕು 29 ಮಾರ್ಚಿನಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹರಿ ಕುಮಾರ್ ಅವರು ದೀಪ ಬೆಳಗಿಸಿ ರಕ್ತದಾನ ಶಿಬಿರದ ಚಾಲನೆ ನೀಡಿದರು. ರಕ್ತದಾನ ಒಂದು ಮಹಾದಾನ, ಇದರಿಂದ ತುಂಬಾ ಜೀವಗಳನ್ನು ಉಳಿಸುವರೆ ನಾವು ಸಹಾಯ ಮಾಡಿದಂತೆ ಆಗುತ್ತದೆ. ನಮ್ಮ ಕಂಪೆನಿಯ ಕೆಲಸಗಾರರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಕರೆ ನೀಡಿದರು. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್, ಮಿಡಟೌನಿನ ಅಧ್ಯಕ್ಷರಾದ ಲಯನ್ ವೀಣಾ ಶೆಟ್ಟಿ, ರೆಡ್ ಕ್ರಾಸ್ ಬ್ಯಾಂಕ್ ಕುಂದಾಪುರದ ಚೇರ್ಮನ್ ಶ್ರೀ ಎಸ್ ಜೈಕರ್ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
 ಸುರಕ್ಷಾ ಅಧಿಕಾರಿ ಶ್ರೀ ಫ್ರಾನ್ಸಿಸ್ ಆಲ್ಡ್ರಿನ್ ಪಿ. ಯೆ   ಸ್ವಾಗತಿಸಿ, ಕೊನೆಗೆ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply