ರಾಜ್ಯಪಾಲರನ್ನು ಭೇಟಿಯಾದ ವಿಪ್ರ ಛಾಯಾಗ್ರಾಹಕರು

ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ   ಬೆಂಗಳೂರಿನ ರಾಜಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 
 
ಸಂಘಟನೆಯ ಮನವಿಗೆ ಸ್ಪಂದಿಸಿದ  ರಾಜ್ಯಪಾಲರಿಗೆ ಶ್ರೀ ಶೃಂಗೇರಿ ಶಾರದಾಂಬೆಯ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ರಾಜ ಭವನದ ರಾಜ್ಯಪಾಲರ ನಿಯೋಗದಲ್ಲಿ ಅಧ್ಯಕ್ಷ ರಮೇಶ್ ಬಿಕೆ, ಕಾರ್ಯದರ್ಶಿ ರಾಮಮೂರ್ತಿ ಉಪಾಧ್ಯ,  ಉಪಾಧ್ಯಕ್ಷ ರಘು ಎಸ್,  ಖಜಾಂಚಿ ಪ್ರದೀಪ್ ಅವರು ಜೊತೆಯಲಿದ್ದರು.
 
 
 
 
 
 
 
 
 
 
 

Leave a Reply