ತನು ಯೋಗ ಭೂಮಿ ಕಾರ್ಯಕ್ರಮದ ನೂರರ ಸಂಭ್ರಮ

ತನು ಯೋಗ ಭೂಮಿ ಕಾರ್ಯಕ್ರಮದ ನೂರರ ಸಂಭ್ರಮ ನಗರದ ಸೈಂಟ್ ಸಿಸಿಲೀಸ್ ಸಭಾಂಗಣದಲ್ಲಿ ನಡೆಯಿತು. ಸಿಸಿಲೀಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಯೋಲಾ‌ ಸಿಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ‌ಸೈನಿಕರಾದ ಸುಭಾಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗಂಗಾಧರ್ ಕರ್ಕೇರ, ಉದ್ಯಮಿಗಳಾದ ಗಾಯತ್ರಿ ಮುತ್ತಪ್ಪ ಕೋಲಾರ, ರಾಜೇಂದ್ರ ಸಿಂಗ್ ರಾಥೋಡ್,ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಅಭಿನಯಾ ಸಂಚಾಲಕ ಕಾರ್ತಿಕ್ ಕಡೇಕಾರ್,ವಿಜಯಕುಮಾರ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ವ್ಯಾಸರಾಜ್ ಶರವೂರು, ಕೃಷಿಕ ಜುಲಿಯನ್ ದಾಂತಿ, ಕಲಾವೊದ ಗಂಗಾಧರ್ ಕಿದಿಯೂರು, ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ, ನಗರಸಭೆ ಪೌರ ಕಾರ್ಮಿಕ ಸುರೇಶ್ , ಸಾಹಿತಿ ಧೀರಜ್ ಬೆಳ್ಳಾರೆ ಅವರನ್ನು ಸನ್ಮಾನಿಸಲಾಯಿತು.

ಯೋಗಪಟುಗಳಾದ ನಜಿಯಾ ಕಾರ್ಕಳ,ನಿರೀಕ್ಷಾ ಪೂಜಾರಿ, ಅನ್ವಿ ಅಂಚನ್,ಉದ್ಭವ್ ದೇವಾಡಿಗ ಅವರನ್ನು ಗೌರವಿಸಲಾಯಿತು.

ಬಳಿಕ ತನುಯೋಗಭೂಮಿ ಕಾರ್ಯಕ್ರಮ ನಡೆಯಿತು. ಇದುವರೆಗೆ ನೂರು ಶಾಲೆಗಳ 30000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

 
 
 
 
 
 
 
 
 
 
 

Leave a Reply