ಪ್ರಾಂತ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯಲ್ಲಿ ಕುಂಜಿಬೆಟ್ಟು ಟಿ.ಎ.ಪೈ ಪ್ರೌಢಶಾಲೆ ಪ್ರಥಮ 

ಭಾರತ ವಿಕಾಸ ಪರಿಷದ್ ನಡೆಸಿದ ಪ್ರಾಂತ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯಲ್ಲಿ ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು.ಸುಮೇಧಾ, ಕು.ಶ್ರೀರಂಜಿನಿ ಆಚಾರ್ಯ ಪಿ, ಕು.ಶೃತಿ ಆರ್ ಪ್ರಭು, ಕು.ಶಾರ್ವರಿ ಪೈ, ಕು. ತ್ರಿಶಾ ಎ ಪ್ರಭು, ಕು. ತ್ರಿಶಾ ಯು, ಕು.ಅಪೇಕ್ಷಾ ಭಟ್ , ಮಾ. ಸುಚೀರ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. 

ಇವರು ಬೆಂಗಳೂರಿನಲ್ಲಿ ನಡೆಯುವ ಪ್ರಾದೇಶಿಕ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಶಿಕ್ಷಕಿ ಶ್ರೀಮತಿ.ಜಯಲಕ್ಷ್ಮೀ ಡಿ ಶೆಟ್ಟಿಗಾರ್ ಅವರ ಮಾರ್ಗದರ್ಶನ ಪಡೆದ ಈ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದಾ ಶೆಟ್ಟಿಯವರು ಅಭಿನಂದಿಸಿರುತ್ತಾರೆ.

 
 
 
 
 
 
 
 
 
 
 

Leave a Reply