ದೆಹಲಿ : ಪೇಜಾವರ ಮಠದಲ್ಲಿ ಸಾಮೂಹಿಕ ಬ್ರಹ್ಮೋಪದೇಶ

ನವದೆಹಲಿಯ ವಸಂತ್ ಕುಂಜ್ ನಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸಾಮೂಹಿಕ ಬ್ರಹ್ಮೋಪದೇಶೋತ್ಸವ ನೆರವೇರಿತು .

ಉತ್ತರ ಪ್ರದೇಶ ಉತ್ತರಾಖಂಡ ಮೊದಲಾದ ರಾಜ್ಯಗಳಿಂದ ಅನೇಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ದೆಹಲಿಯ ಶ್ರೀಮಠದಲ್ಲಿನ‌ ಗುರುಕುಲದಲ್ಲಿ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ  ಅವರಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪ್ರತೀವರ್ಷ ಸಾಮೂಹಿಕ ಬ್ರಹ್ಮೋಪದೇಶೋತ್ಸವವನ್ನೂ ಶ್ರೀ ಮಠದ ವತಿಯಿಂದಲೇ ನಡೆಸಲಾಗುತ್ತಿದೆ.

ಇವತ್ತು 12 ಬಾಲಕರಿಗೆ ಉಪನಯನ ಸಂಸ್ಕಾರ ಸಮಾರಂಭ ನಡೆಯಿತು. ಶ್ರೀಪಾದರು ಉಪಸ್ಥಿತರಿದ್ದು ವಟುಗಳಿಗೆ ಶ್ರೀ ಕೃಷ್ಣಮಂತ್ರೋಪದೇಶ ಸಹಿತ ಅನುಗ್ರಹಿಸಿದರು.

 
 
 
 
 
 
 
 
 
 
 

Leave a Reply