ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶ್ವ ರೂಪ ದರ್ಶನ

​ಉಡುಪಿ ತೆಂಕಪೇಟೆ  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು ಮುಂಜಾನೆ  5 ಕ್ಕೆ ಪಶ್ಚಿಮ  ಜಾಗರ  ಪೂಜೆ, ಸುಪ್ರಭಾತ , ಕಾಕಡ ಆರತಿ , ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪ ದರ್ಶನ ನೆರವೇರಿತು.ಈ  ಬಾರಿಯ ವಿಶೇಷ ಆಕರ್ಷಣೆಯಾಗಿ  ಶ್ರೀ ಮಹಾಕಾಳಿ  ಅವತಾರ , ಗರುಡವಾಹನ, ರಂಗೋಲಿಯ ಚಿತ್ತಾರಮೂಡಿಬಂದಿದೆ.  ಹೂಗಳಿಂದ ರಚಿಸಿದ ರಂಗೋಲಿಯಲ್ಲಿ ಹಣತೆಯ  ದೀಪದಿಂದ  ಓಂ, ಸ್ವಸ್ತಿಕ್, ಶಂಖ ಚಕ್ರಗಳನ್ನು ರಚಿಸ ಲಾಯತು. 

ಪ್ರಧಾನ ಅರ್ಚಕ ದಯಘನ್  ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ , ಆಡಳಿತ ಮಂಡಳಿ ಸದಸ್ಯರಾದ  ಗಣೇಶ್ ಕಿಣಿ, , ವಸಂತ್ ಕಿಣಿ, ವಿಶ್ವನಾಥ್ ಭಟ್, ಮತ್ತು ನರಹರಿ ಶೆಣ್ಣ್ಯ್, ವಿಶಾಲ್ ಶೆಣ್ಣ್ಯ್, ಮಟ್ಟಾರ್ ಗಣೇಶ್ ಕಿಣಿ , ಭಾಸ್ಕರ್ ಶೆಣ್ಣ್ಯ್, ಶ್ಯಾಂಪ್ರಸಾದ್ ಕುಡ್ವ , ಪ್ರದೀಪ್ ರಾವ್, ಮಟ್ಟಾರ್ ಸತೀಶ್ ಕಿಣಿ, ಮತ್ತು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು  ಸಮಾಜ ಬಂದವರು ಉಪಸ್ಥಿತರಿದ್ದರು.

ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು.  ಶ್ರೀ ದೇವರಿಗೆ  ವಿಶೇಷ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ  ಪ್ರಸಾದ ವಿತರಣೆ ನಡೆಯತು.   

 
 
 
 
 
 
 
 
 
 
 

Leave a Reply