ಆಚಾರ ವಿಚಾರ ಪಲಿಮಾರು ಯತಿದ್ವಯರಿಂದ ಬೆಂಗಳೂರು, ಮೈಸೂರಿನಲ್ಲಿ ತಪ್ತಮುದ್ರಾಧಾರಣೆ By Janardhan Kodavoor/Team karavalixpress, - June 29, 2023 ಸರ್ವ ಪಾಪ ಹರವಾದ ತಪ್ತಮುದ್ರಾಧಾರಣೆಯನ್ನು ಆಷಾಢ ಶುದ್ಧ ಏಕಾದಶಿಯಂದು ಪಲಿಮಾರು ಮಠದ ಹಿರಿಯ ಶ್ರೀಪಾದರಾದ ವಿದ್ಯಾಧೀಶತೀರ್ಥರು, ಕಿರಿಯ ಶ್ರೀಪಾದರಾದ ವಿದ್ಯಾರಾಜೇಶ್ವರತೀರ್ಥರು ಬೆಂಗಳೂರು ಮಹಾನಗರದಲ್ಲಿ ನಡೆಸಿ ನಂತರ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಭಕ್ತರಿಗೆ ಮುದ್ರಾಧಾರಣೆಯನ್ನು ನಡೆಸಲಾಯಿತು.