ಅಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ~ ಇಲ್ಲಿ ಪುಣ್ಯಕೋಟಿ ಗೋಸೇವಾ ಬಳಗದ ಗೋಪೂಜೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ, ಹಾಗೂ ಪ್ರಭು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಯ ಐತಿಹಾಸಿಕ ದಿನ ದ ಅವಿಸ್ಮರಣೀಯ ದಿನವನ್ನು , ನಿನ್ನೆ ದೇಶದಾದ್ಯಂತ ಜನರು ಅತ್ಯಂತ ಶೃದ್ಧಾಭಕ್ತಿಯಿಂದ , ಸಂಭ್ರಮ, ಸಡಗರದಿಂದ ಆಚರಿಸಿದ್ದು, ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ ಸದಸ್ಯರು, ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆಯ ಶುಭದಿನದಂದು ಗೋಧೂಳಿ ಸಮಯದಲ್ಲಿ , ತಮ್ಮ 84 ನೇ ತಿಂಗಳ ಗೋಪೂಜೆಯನ್ನು ಅಲೆವೂರು ಕೆಳಮನೆ ಗಿರಿಜಾ ಶೆಟ್ಟಿ ಇವರ ಮನೆಯಲ್ಲಿ ಸಂಭ್ರಮದಿಂದ  ಆಚರಿಸಿದರು.
ಪುಣ್ಯಕೋಟಿ ಗೋಸೇವಾ ಬಳಗದ ಪ್ರಮುಖರಾದ ಶ್ರೀಮತಿ ಜ್ಯೋತಿ ಸತೀಶ್ ದೇವಾಡಿಗ, ಶ್ರೀಮತಿ ತಾರಾ . ಯು.ಆಚಾರ್ಯ, ಸರೋಜಾ ಯಶ್ ವಂತ್, ಅನುರಾಧಾ ಉದಯ್, ಸರೋಜಾ ಶೆಣೈ, ರೇವತಿ ರಮಾನಂದ್ ಶೆಟ್ಟಿ, ಶಾಂತಾ ಕೊಳಂಬೆ, ಅನಿತಾ ನಾಯ್ಕ್, ವಿನುತಾ ಶೇರಿಗಾರ್ , ಹಾಗೂ ಶ್ರೀಮತಿ ಗಿರಿಜಾ ಶೆಟ್ಟಿ ಮತ್ತು ಮನೆಯವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply