ಆರೂರು ಸಂಭ್ರಮದ ವಿಶ್ವರೂಪ ದರ್ಶನ ಸಂಪನ್ನ

ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ವೈಕುಂಠ ಚತುರ್ದಶಿಯಂದು ಬ್ರಾಹ್ಮೀ ಮುಹೂರ್ತ ದಲ್ಲಿ ಸಾವಿರಾರು ದೀಪವನ್ನು ಬೆಳಗಿಸಿ ವಿಶ್ವರೂಪ ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ಮೋಹನ್ ರಾವ್ ಮತ್ತು ಬಳಗದವರಿಂದ ಭಜನಾಮೃತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರೂರು ರತ್ನಾಕರ ಭಟ್, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್, ಅರ್ಚಕ ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಅರುಣ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಈಶ್ವರ್ ಶೇರಿಗಾರ್ ಮೇಲ್ಮನೆ, ರತ್ನಾಕರ ನಾಯ್ಕ್, ಸಂತೋಷ್ ಕುಲಾಲ್, ವನಿತಾ ಸಿ.ರಾವ್, ದೀಪಾ ಪೂಜಾರಿ ಶ್ರೀನಿವಾಸ್ ಭಟ್ ಆರೂರು, ಅರ್ಚಕ ವೃಂದ, ಉಪಾದಿವಂತರು, ಸಿಬ್ಬಂದಿ ವರ್ಗ, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply