ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ಜರಗುವ ಕಾರ್ತಿಕ ದೀಪೋತ್ಸವ ಬುಧವಾರ ನೆಡೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ ,ಪಲ್ಲಕಿ ಉತ್ಸವ , ಮಹಾಪೂಜೆ, ಸಮಾರಾಧನೆ, ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ಕೆರೆದೀಪ, ಬಳಿಕ ಪೇಟೆ ಉತ್ಸವ, ಕಟ್ಟೆಪೂಜೆ ನೆಡೆಯಿತು.
ಧಾರ್ಮಿಕ ವಿಧಾನಗನ್ನು ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್ ನೆರವೇರಿಸಿದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು ಧನ್ಯರಾದರು
ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ, ಅರ್ಚಕರಾದ ದೀಪಕ್ ಭಟ್, ಗಿರೀಶ್ ಭಟ್ ಜಿ.ಎಸ್ ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ , ವಿಶಾಲ್ ಶೆಣೈ , ನರಹರಿ ಪೈ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಜಎಸ್ ಬ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು, ಹಾಗೂ ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.