ಉಡುಪಿ : ಪ್ರಸಿದ್ಧ ಹಾಗೂ ಕಾರಣಿಕೆಯ ಪುಣ್ಯಕ್ಷೇತ್ರವಾಗಿರುವ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದೇವಿಗೆ ಶಶಿಧರ ಶೆಟ್ಟಿ ಎನ್ ಮತ್ತು ಅವರ ಕುಟುಂಬದವರು ಸೇವಾರ್ಥ ಉಡುಪಿಯ ಸ್ವರ್ಣ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಚಿನ್ನಾಭರಣ ಉತ್ಪಾದನಾ ಘಟಕವಾದ `ಸ್ವರ್ಣೋದ್ಯಮ’ದಲ್ಲಿ ನಿರ್ಮಿಸಿಕೊಟ್ಟ ಚಿನ್ನದ ಮುಖ ಕವಚವನ್ನು ಅ.11ರ ಭಾನುವಾರದಂದು ಒಪ್ಪಿಸಲಾಯಿತು.
ಶ್ರೀ ದೇವಳದ ಆನುವಂಶೀಯ ಟ್ರಸ್ಟಿ ಮತ್ತು ಹಾಲಿ ಅಧ್ಯಕ್ಷರಾಗಿರುವ ಶ್ರೀ ಧನಂಜಯ ಶೆಟ್ಟಿ ಆವರಿಗೆ ಸ್ವರ್ಣ ಮುಖ ಕವಚವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಋಷೀಕೇಶ ಬಾಯಿರಿ (ತಂತ್ರಿಗಳು), ಸದಾಶಿವ ಉಡುಪ (ಅರ್ಚಕರು), ಶ್ರೀ ಶಶಿಧರ ಎನ್ ಶೆಟ್ಟಿ ಮತ್ತು ಕುಟುಂಬದವರು, ಜಯರಾಮ ಎನ್ ಶೆಟ್ಟಿ ಮತ್ತು ಕಟುಂಬದವರು, ಸ್ವರ್ಣ ಜ್ಯುವೆಲ್ಲರ್ಸ್ನ ಗುಜ್ಜಾಡಿ ರಾಮದಾಸ ನಾಯಕ್ ಮತ್ತು ಗುಜ್ಜಾಡಿ ದೀಪಕ್ ಆರ್. ನಾಯಕ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹೇಶ್ ಉಪಸ್ಥಿತರಿದ್ದರು.