ನಾಯ್ಕನಕಟ್ಟೆ ಚಂಪಾ ಷಷ್ಠಿ

ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ  ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ಚಂಪಾ ಷಷ್ಠಿ ಸಂಪನ್ನಗೊಂಡಿತು. ಅರ್ಚಕರಾದ ಬಾಲಕೃಷ್ಣ ಭಟ್ ನೇತ್ರತ್ವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆಯಿಂದ ಆರಂಭಗೊಂಡ ಧಾರ್ಮಿಕ ವಿಧಿಗಳು,ಮದ್ಯಾಹ್ನ ಅಲಂಕಾರ ಪೂಜೆ, ಸಮಾರಾಧನೆ, ಸಾಯಂಕಾಲ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಉಭಯ ದೇವಳಗಳಲ್ಲಿ ವಿಶೇಷ ಅಲಂಕಾರ ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು. ಸಮಾರಾಧನೆ ಹಾಗೂ ಮದ್ಯಾಹ್ನ ವಿಶೇಷ ಪೂಜೆಯನ್ನು ಕಂಚಿಕಾನ್ ಕಿಣಿ ಕುಟುಂಬದ ದಿ.ವೆಂಕಟೇಶ ಕಿಣಿಯವರ ಮಕ್ಕಳು ಹಾಗೂ ಸಾಯಂಕಾಲ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಪೂಜೆ ಸೇವೆಯನ್ನು ದಿ.ಸುರೇಂದ್ರ ಕಿಣಿಯವರ ಮಕ್ಕಳು ನೆರವೆರಿಸಿದರು.ದೇವಿದಾಸ ಭಂಡಾರ್ಕರ್ ಮನೆಯ ಆವರಣದಲ್ಲಿ ಕಟ್ಟೆಪೂಜೆ ನೆರವೇರಿತು. ದೇವಳದ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ್ ಪೈ, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply