ಸಕಲ ಜೀವಿಗಳಲ್ಲಿ ಕೃಷ್ಣನ ಕಾಣುವ ಯತಿವರೇಣ್ಯರು

ಉಡುಪಿ: ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಸ್ವತಃ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೇ ಬಾವಿಗಿಳಿದ ಘಟನೆ ಭಾನುವಾರ ನಡೆದಿದೆ. ಶ್ರೀಮಠದ ಸುಪರ್ದಿಗೊಳಪಡುವ ಮುಚ್ಚಿಲಗೋಡು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭಾನುವಾರ ಶ್ರೀಪಾದರು ತೆರಳಿದ್ದರು. ಅದೇ ವೇಳೆ ದೇವಳದ ಆವರಣದ ಬಾವಿಯಲ್ಲಿ ಬೆಕ್ಕೊಂದು ಬಿದ್ದಿರುವ ಸುದ್ದಿ ತಿಳಿದರು.
ಅಲ್ಲಿದ್ದವರು ಬೆಕ್ಕನ್ನು ಮೇಲಕ್ಕೆತ್ತಲು ಹರ ಸಾಹಸಪಟ್ಟರೂ ಅಸಾಧ್ಯವಾದಾಗ ಸ್ವತಃ ಶ್ರೀಪಾದರೇ ರಾಟೆಗೆ ಹಗ್ಗ ಬಿಗಿದು ಸುಮಾರು 40 ಅಡಿ ಆಳದ ಬಾವಿಗೆ ಇಳಿದೇ ಬಿಟ್ಟರು. ಬಾವಿಯಲ್ಲಿ ಸುಮಾರು 15 ಅಡಿಯಷ್ಟು ನೀರಿತ್ತು.
ನೀರಿನಲ್ಲಿ ನೆನೆದು ತೊಪ್ಪೆಯಾಗಿ ಆಕ್ರಂದನವೀಯುತ್ತಾ ಬಾವಿಯ ಅಂಕಣದಲ್ಲಿ ಕುಳಿತಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಕೆಟ್ ಒಂದನ್ನು ಇಳಿಸಿ ಅದರೊಳಗೆ ಕುಳ್ಳಿರಿಸಲು ಯತ್ನಿಸಿದರೂ ಜೀವ ಭಯದಿಂದ ಬೆಕ್ಕು ಚೆಂಗನೆ ಜಿಗಿಯಿತು!
ಮೇಲಿಂದ ಅಂಗವಸ್ತ್ರವೊಂದನ್ನು ಪಡೆದ ಶ್ರೀಪಾದರು ಕಿರಿದಾದ ಬಾವಿಯ ಅಂಗಣಗಳ ನಡುವೆ ನಿಂತು ಬೆಕ್ಕನ್ನು ಕೈಯ್ಯಲ್ಲಿಯೇ ಹಿಡಿದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ಅದರ ಜೀವ ಉಳಿಸಿದ ಶ್ರೀ ಪಾದರು.
 
 
 
 
 
 
 
 
 
 
 

Leave a Reply