ನಾಯ್ಕನಕಟ್ಟೆ ವೆಂಕಟರಮಣ ದೇವಸ್ಥಾನದ ಪುನಃ ಪ್ರತಿಷ್ಠಾ ವರ್ಧಂತಿಯಂದು ತಾನು ಪೆನ್ಸಿಲ್ ನಿಂದ ರಚಿಸಿದ ಶ್ರೀ ವೆಂಕಟರಮಣ ದೇವರ ಪೆನ್ಸಿಲ್ ಆರ್ಟ್ ಪೋಟೊವನ್ನು ಕುಮಾರಿ ವಸುಧಾ ದೇವಾಲಯಕ್ಕೆ ಅರ್ಪಿಸಿದಳು.
ಈಗಾಗಲೇ ಹಲವಾರು ಪೆನ್ಸಿಲ್ ಆರ್ಟ್ ರಚಿಸಿದ್ದು, ಶ್ರೀ ವೆಂಕಟರಮಣ ಕಲಾಕೃತಿ ಅಪೂರ್ವವಾಗಿ ಮೂಡಿಬಂದಿರುವದು ಅವಳ ಕಲಾ ಆಸಕ್ತಿಗೆ ಸಾಕ್ಷಿಯಾಗಿದೆ.ಈಕೆ ಬೈಂದೂರಿನ ಕೆರ್ಗಾಲು ಗ್ರಾಮದ ಹೊಸ್ಕೊಟೆ ಶಂಕರನಾರಾಯಣ ಭಂಡಾರ್ಕರ್ ಮತ್ತು ಸೌಜನ್ಯ ಭಂಡಾರ್ಕರ್ ಅವರ ಪುತ್ರಿಯಾಗಿದ್ದು, ಪ್ರಸ್ತುತ ಉಡುಪಿ ಎಮ್.ಜಿ.ಎಮ್ ಕಾಲೇಜಿನಲ್ಲಿ ಬಿ.ಸಿ.ಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದಾಳೆ.